ಚಂಡೀಗಢ: ಪ್ಯಾಸೆಂಜರ್ ರೈಲಿಗೆ ಸಿಲುಕಿ 3 ಮಕ್ಕಳು ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಶ್ರೀ ಕಿರತ್ಪುರ್ ಸಾಹಿಬ್ ಬಳಿ ನಡೆದಿದೆ. ವಲಸೆ ಕಾರ್ಮಿಕರ ನಾಲ್ವರು ಮಕ್ಕಳು, ಸಟ್ಲಜ್ ನದಿಯ ರೈಲ್ವೆ ಟ್ರ್ಯಾಕ್ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಮೂರು ಮಕ್ಕಳು ಸಾವನ್ನಪ್ಪಿದ್ದರೆ, ನಾಲ್ಕನೆಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Kirtarpur Sahib, Punjab | Three children dead, one injured in a train accident
2 children died on spot. One died on way to hospital. 4th one is being treated. Children had come here to eat berries off trees & did not realise a train was approaching them: ASI GRP, Jagjit Singh pic.twitter.com/SWZQQ0f2bu
— ANI (@ANI) November 27, 2022
ಸಂತ್ರಸ್ತ ಮಕ್ಕಳು 7-11 ವಯಸ್ಸಿನವರಾಗಿದ್ದರು ಎಂದು ತಿಳಿದುಬಂದಿದೆ. ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. 4 ನೇ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆರ್ರಿ ಹಣ್ಣುಗಳನ್ನು ತಿನ್ನುವುದಕ್ಕಾಗಿ ಮಕ್ಕಳು ಇಲ್ಲಿಗೆ ಬಂದಿದ್ದರು. ಆದರೆ ರೈಲು ತಮ್ಮತ್ತ ಬರುತ್ತಿರುವುದು ಅವರಿಗೆ ಅರಿವಾಗಲಿಲ್ಲ ಎಂದು ಎಎಸ್ಐ ಜಿಆರ್ ಪಿ ಜಗ್ಜೀತ್ ಸಿಂಗ್ ಹೇಳಿದ್ದಾರೆ.
3 children killed after being run over by train