ಚಿಕ್ಕಮಗಳೂರು: ದಲಿತರ ಮೇಲಿನ ದೌರ್ಜನ್ಯ ತಡೆ ಸಮಿತಿಗೆ ದಲಿತಪರ ಸಂಘಟನೆ ಯಲ್ಲಿ ಸೇವೆ ಸಲ್ಲಿಸಿದವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬಳಿಕ ಮಾತನಾಡಿದ ದಸಂಸ ರಾಜ್ಯ ಸದಸ್ಯ ಕೆ.ಸಿ.ವಸಂತ್‌ಕುಮಾರ್ ಜಿಲ್ಲಾಧಿಕಾರಿ ಹಾಗೂ ಎಸ್ಪಿ ನೇತೃತ್ವದಲ್ಲಿ ಸಭೆಗಳಿಗೆ ದಲಿತ ಸಂಘದ ಪ್ರತಿ ತಾಲ್ಲೂಕಿನ ಮುಖಂಡರಿಗೆ ನಡೆದಿರುವ ಸಮಸ್ಯೆ ಬಗ್ಗೆ ಅಧಿಕಾ ರಿಗಳ ಗಮನಕ್ಕೆ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸಿದೆ. ಅಲ್ಲದೇ ದೂರವಾಣಿ ಕರೆ ಮಾಡಲಾಗುತ್ತಿದೆ ಎಂ ದರು.

ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಮತ್ತು ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ ಜಾರಿಗೆ ತಂದಿರುವುದು ಸರಿಯಿದೆ. ಆದರೆ ಇತ್ತೀಚಿನ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಆ ಕಮಿಟಿಗೆ ದಲಿತ ಪರ ಸಂಘಟನೆಗಳ ಮುಖ ಂಡರನ್ನು ಸದಸ್ಯರುಗಳಾಗಿ ನೇಮಕ ಮಾಡಲಾಗುತ್ತಿತ್ತು ಎಂದರು.

ಆದರೀಗ ಸುಮಾರು ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದವರು ನೇಮಕ ಪಟ್ಟಿ ತಯಾರಿಸಲಾಗುತ್ತಿತ್ತು. ಈ ರೀತಿ ಆಗುವುದರಿಂದ ದಲಿತರ ಮೇಲೆ ನಡೆಯುವ ದೌರ್ಜನ್ಯ ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಂತಾಗಿದೆ ಎಂದು ತಿಳಿಸಿದರು.

ಜನಸಂಪರ್ಕ ಇಲ್ಲದ ವ್ಯಕ್ತಿಗಳ ಸಮಿತಿಗೆ ಸದಸ್ಯರಾದರೆ ಈ ಕಾಯಿದೆಯ ಅನುಷ್ಟಾನದಲ್ಲಿ ನಿರೀಕ್ಷೆ ಮಟ್ಟದ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂ ದ ಸ್ವೀಕರಿಸಿರುವ ವ್ಯಕ್ತಿಗಳಲ್ಲಿ ದಲಿತಪರ ಸಂಘಟನೆಯಲ್ಲಿ ಸೇವೆ ಸಲ್ಲಿಸಿರುವವರಿಗೆ ಅವಕಾಶ ಕಲ್ಪಿಸಿ ರಾಜ ಕೀಯೇತರ ಸಮಿತಿಯನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ.ಪಿ.ಜಯರಾಮಯ್ಯ, ಕೆಂಪಚಪ್, ವಿ.ಧರ್ಮೇಶ್, ತಾಲ್ಲೂಕು ಸಂಚಾಲಕರಾದ ವಿನುತ್, ಅಣ್ಣಯ್ಯ, ಮುಖಂಡರುಗಳಾದ ದಂಟರ ಮಕ್ಕಿ ಶ್ರೀನಿವಾಸ್, ಹೊನ್ನೇಶ್, ಹುಣಸೇಮಕ್ಕಿ ಲಕ್ಷ್ಮಣ್, ಟಿ.ಎಲ್.ಗಣೇಶ್, ಹರೀಶ್‌ಮಿತ್ರ, ಜಗದೀಶ್‌ಕೋಟೆ ರಮೇಶ್ ಮತ್ತಿತರರು ಹಾಜರಿದ್ದರು.

Dalit Sangharsh Committee leaders appeal to Shirastedar Manu