ಚಿಕ್ಕಮಗಳೂರು: ವೈದ್ಯಕೀಯ ಲೋಕದಲ್ಲಿ ಸೇವೆಯ ಜೊತೆಗೆ ಮಾನವೀಯ ಮೌಲ್ಯ ಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಮಾತ್ರ ಸಾರ್ಥಕ ಬದುಕು ನಮ್ಮದಾಗಲಿದೆ ಎಂದು ಕರ್ನಾಟಕ ಖಾಸಗೀ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‌ಕುಮಾರ್ ಹೇಳಿದರು.

ನಗರದ ಬೈಪಾಸ್ ಸಮೀಪದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಡಾ.ಬಿ.ಸಿ.ರಾಯ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ವೈದ್ಯವೃಂದ ಬಹಳಷ್ಟು ಸೇವೆ ಸಲ್ಲಿಸುವ ಮೂಲಕ ಅತ್ಯುತ್ತಮವಾಗಿದೆ. ದಾದಿಯರ ಪ್ರೇರಣೆ ಪ್ಲೋರೆನ್‌ನೈಟಿಂಗೇಲ್ ಎಂದಾದರೆ, ವೈದ್ಯರ ಪಿತಾಮಹ ಡಾ.ಬಿ.ಸಿ.ರಾಯ್ ಎಂದ ಅವರು ಆ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ನೆನಪಾರ್ಥ ವೈದ್ಯರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.

ಜನಸಾಮಾನ್ಯರ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರ ಸೇವೆ ಅಪಾರವಾದುದು. ವೈದ್ಯರ ಉದ್ಯೋಗದಲ್ಲಿ ಕಾರ್ಯನಿರ್ವಹಿಸುವವರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ರೋಗಿಗಳನ್ನು ಕಾಳ ಜಿಯಿಂದ ಆರೈಕೆ ಮಾಡಿ ಮತ್ತೊಮ್ಮೆ ಬದುಕುವಂತೆ ಮಾಡುವ ಶಕ್ತಿ ವೈದ್ಯ ಲೋಕಕ್ಕಿದೆ ಎಂದು ತಿಳಿಸಿದರು.

ಭಾರತದಲ್ಲಿ ಜುಲೈ.೧ ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಡಾ.ಬಿ.ಸಿ.ರಾಯ್ ಅವರ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗು ತ್ತದೆ. ಕುತೂಹಲಕರ ವಿಚಾರವೆಂದರೆ ಅವರ ಜನನ ಹಾಗೂ ತೀರಿಕೊಂಡಿದ್ದು ಜುಲೈ ೦೧ ಒಂದೇ ದಿನ ವಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಅಶ್ವತ್‌ಬಾಬು ಮಾತನಾಡಿ ಆಕಸ್ಮಿಕ ಅಥವಾ ಅಪಘಾತಗಳಿಂದ ಸಂಭವಿಸುವ ಪ್ರಕರಣಗಳಿಂದ ಮನುಷ್ಯನ ಅಂಗಾಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಉದ್ಬವಿಸಲಿದೆ. ಇಂ ಥಹ ತುರ್ತು ಪರಿಸ್ಥಿತಿಗಳಲ್ಲಿ ವೈದ್ಯರು ಸ್ಪಂದಿಸಿ ಪ್ರಾಣ ಉಳಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಚೈತನ್ಯ ಸವೂರ್ ಸಂಘದಿಂದ ವೈದ್ಯರ ಕುಟುಂಬಗಳಿಗೆ ಕ್ರೀಡಾಕೂಟ ಆಯೋಜಿಸಿ ಯಶಸ್ವಿಗೊಂಡಿದೆ. ಅಲ್ಲದೇ ಇಂದಿನ ಸಂಜೆ ಸಾಂಸ್ಕೃತಿಕ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸ್ಪೂರ್ತಿದಾಯಕರಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ವೈದ್ಯಕೀಯ ವೃತ್ತಿ ಹಲವಾರು ದಶಕಗಳಿಂದ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರಾದ ಡಾ|| ಟಿ.ವಿ.ರಾಮಕೃಷ್ಣ, ಡಾ|| ಎಂ.ಜಿ.ಶ್ರೀಧರ್ ಹಾಗೂ ಡಾ|| ಎಲ್.ವಿ.ಚಂದ್ರಕಾಂತ್ ಅವರಿಗೆ ಸಂಘದಿಂದ ದಿನಾಚರಣೆ ಪ್ರಯುಕ್ತ ಆತ್ಮೀಯವಾಗಿ ಗೌರವಿಸಲಾಯಿತು. ಬಳಿಕ ಮಕ್ಕಳಿಂದ ಭರತನಾಟ್ಯ ಸೇರಿದಂತೆ ಸಾಂ ಸ್ಕೃತಿಕ ಚಟುವಟಿಕೆ ಜರುಗಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕಾರ್ತೀಕ ವಿಜಯ್, ವೈದ್ಯರುಗಳಾದ ಡಾ|| ಶಶಿಕಲಾ, ಡಾ|| ಪ್ಯಾಟ್ರಿಕ್, ತ್ರಿವೇಣಿ ಅಶ್ವಥ್ ಬಾಬು ಹಾಗೂ ವೈದ್ಯರು ಕುಟುಂಬದವರು ಭಾಗಿಯಾಗಿದ್ದರು.

National Doctor’s Day is celebrated on the occasion of Dr. BC Roy’s birthday