ತಿರುವನಂತಪುರಂ: ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ಕೋವಿಡ್ ನಿಂದಾಗಿ ಅನಾಥರಾದ ಮಕ್ಕಳಿಗಾಗಿ 3 ಲಕ್ಷಗಳ ONE TIME  ಆರ್ಥಿಕ ನೆರವು ಘೋಷಿಸಿದೆ.

ಈ ಘೋಷಣೆ ನೀಡಿರುವ ಸರ್ಕಾರ, ಪ್ರತಿ ತಿಂಗಳು ಮಕ್ಕಳಿಗೆ ೧೮ ವರ್ಷ ತುಂಬುವವರೆಗೆ ೨ ಸಾವಿರ ರೂ ಮತ್ತು ಪದವಿ ಪಡೆಯುವವರೆಗೂ ಮಕ್ಕಳ ಶಿಕ್ಷಣ ವೆಚ್ಚ ಭರಿಸುವುದಾಗಿ ಕೇರಳ ಸರ್ಕಾರ ಘೋಷಣೆ ಹೊರಡಿಸಿದೆ.

ಟ್ವಿಟ್ಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಕೇರಳ ಸಿಎಂ, ’ಈ ನೂತನ ಯೋಜನೆಗಾಗಿ ಬೊಕ್ಕಸದಿಂದ 3.20 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.