ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ನಡೆಸಿದ್ದು ತಾವೇ ಎಂದು ಬಹಿರಂಗವಾಗಿ ಒಪ್ಪಿಕೊಂಡು ಸರ್ಕಾರದ ವಿರುದ್ಧ ಸವಾಲು ಎಸೆದ ಹಿಂದೂ ಮಹಾಸಭಾ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲೆಸಬೇಕೆಂದು ಕುಂಬ್ರದಲ್ಲಿ SDPI ಪ್ರತಿಭಟನೆ ತೀವ್ರತರವಾಗಿ ನಡೆಸಿದೆ.

ಪ್ರತಿಭಟನಾ ಸಭೆಯನ್ನು ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಶೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಭಾರತದ ಮೊದಲ ಭಯೋತ್ಪಾದಕ ಕೃತ್ಯವಾದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಸಮರ್ಥಿಸಿ ಒಪ್ಪಿಕೊಂಡು ಇನ್ನೂ ಕೂಡಾ ಮುಂದುವರೆಸುತ್ತೇವೆ ಎಂಬ ಪ್ರಚೋಧನಾಕಾರಿ ಹೇಳಿಕೆ ನೀಡಿದ ಇವರನ್ನು ಬಂಧಿಸಿದರೆ ಸಾಲದು, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲೆ ಮಾಡಬೇಕು. ತನಿಖೆ ನಡೆಸಿದರೆ ಮಾತ್ರ ಮುಂದೆ ದೊಡ್ಡ ಅನಾಹುತ ತಡೆಯಬಹುದು ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ SDPI ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ ಮಹಾತ್ಮ ಗಾಂಧೀಯವರನ್ನು ಹತ್ಯೆಗೈದ ಹಿಂದೂ ಮಹಾಸಭಾವು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರಿಂದ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷರಾದ ಶರೀಫ್ ಕಟ್ಟತ್ತಾರು, ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಉಪಾಧ್ಯಕ್ಷ ಹಮೀದ್ ಸಾಲ್ಮರ, ಸಮಿತಿ ಸದಸ್ಯ ಮೊಹಮ್ಮದ್ ಪಿ ಬಿ ಕೆ, ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಒಳಮೊಗರು ಗ್ರಾಮ ಸಮಿತಿ ಸದಸ್ಯ ಸಿರಾಜ್ ಪರ್ಪುಂಜ, ಬ್ಲಾಕ್ ಕಾರ್ಯದರ್ಶಿ ಅಶ್ರಫ್ ನರಿಮೊಗರು,ಮುಖಂಡರಾದ ಶಾಕಿರ್ ಕಟ್ಟತ್ತಾರ್ ಹಾಗು ಸ್ಥಳೀಯ ಮುಖಂಡರಾದ ಹನೀಫ್ ಪಿ ಎಂ, ಅಶ್ರಫ್ ಪಿ ಬಿ, ರಫೀಕ್ ನಂಜೆ,ಸವಾದ್ ರೆಂಜ,ಉಮರ್ ಕೆಯ್ಯುರು, ಎಸ್ ಎಂ ಮೊಹಮ್ಮದ್ ಕುಂಬ್ರ ಹಾಗು ವಿವಿಧ ಗ್ರಾಮ ಸಮಿತಿ ಹಾಗು ಬೂತ್ ಸಮಿತಿ ಮುಖಂಡರು, ಕಾರ್ಯಕರ್ತರು ಹಾಗು ಸಾರ್ವಜನಿಕರು ಭಾಗವಹಿಸಿದ್ದರು