ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿ ನೀಡುವ ಮಯೂರ ವರ್ಮ ಪ್ರಶಸ್ತಿಗೆ ಜಿಲ್ಲೆಯ ದೀಪಾ ಹಿರೇಗುತ್ತಿ, ಅರಸೀಕೆರೆ ಮಮತಾ ಸಹ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ದೀಪಾ ಹಿರೇಗುತ್ತಿ ಅಂಕಣ ಬರಹ ಸೇರಿದಂತೆ ಸಾಹಿತ್ಯ ಕೃಷಿ, ಸಮಾಜಮುಖಿ ಕೆಲಸಗಳಲ್ಲಿ  ತೊಡಗಿದ್ದಾರೆ.

ಮಮತಾ ಅರಸೀಕೆರೆ ಕವಿ, ನಾಟಕಕಾರ್ತಿ, ಲೇಖಕಿಯಾಗಿದ್ದು ಅರಸೀಕೆರೆಯಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದಾರೆ. ಸಾಂಸ್ಕೃತಿಕವಾಗಿ ಸಹ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಬೆಳವಾಡಿಯವರು.

ಪ್ರಶಸ್ತಿಯು ೨೫,೦೦೦ ನಗದು ಪುರಸ್ಕಾರ ಒಳಗೊಂಡಿದ್ದು, ಇದೇ ಅ. ೨೭ ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜಿಸಿದೆ.