ನವದೆಹಲಿ:  ೧೩ ವರ್ಷದ ದಲಿತ ಬಾಲೆಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಅಮಾನುಷ ಘಟನೆ ನಡೆದಿದೆ.  ಇದಕ್ಕೆ ಸಂಬಂಧಿಸಿದಂತೆ ಭೂಮಾಲಿಕನ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಪತ್ನಿ ಕೂಡಾ ಈ ಕೃತ್ಯದಲ್ಲಿ ಸಾಥ್ ನೀಡಿದ್ದಾಳೆ ಎಂದು ಸಂತ್ರಸ್ಥ ಕುಟುಂಬ ದೂರಿನಲ್ಲಿ ಉಲ್ಲೇಖಿಸಿದೆ.  ಅತ್ಯಾಚಾರ ನಡೆದ ನಂತರದ ಸಂದರ್ಭದಲ್ಲಿ ಬಾಲಕಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಸಂತ್ರಸ್ಥ ಕುಟುಂಬದವರನ್ನು ಬೆದರಿಸಿ ಅಂತ್ಯಕ್ರಿಯೆ ನಡೆಸಲು ಮುಂದಾದ ಸನ್ನಿವೇಶದಲ್ಲಿ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಅತ್ಯಾಚಾರ ನಡೆದ ಸಂದರ್ಭದಲ್ಲಿ ಅಕ್ರಮಣ ನಡೆದಿದ್ದು, ಆಕೆಯ ಮುಖ ಮತ್ತು ಗುಪ್ತಾಂಗದಲ್ಲಿ ಗಂಭೀರ ಗಾಯಗಳಾಗಿದ್ದವು, ಇದರಿಂದ ಅನಾರೋಗ್ಯ ಹೊಂದಿ ಬಾಲಕಿ ಮೃತಪಟ್ಟಿದ್ದಾಳೆ.
ಬಾಲಕಿಯ ತಂದೆ ದಿನಗೂಲಿ ನೌಕರ, ಆಕೆಯನ್ನು ಗುರುಗಾಂವ್ ನಲ್ಲಿ ಮನೆಗೆಲಸಕ್ಕೆ ಸೇರಿಸಿದ್ದು, ಆರೋಪಿ ಪ್ರವೀಣ್ ಈ ಕೃತ್ಯ ಎಸಗಿದ್ದಾರೆ.  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಿಂದ ಬಾಲಕಿಯ ಮೈಮೇಲೆ ಅತ್ಯಾಚಾರ ಹಾಗೂ ಆಕ್ರಮಣ ನಡೆದಿರುವುದು ಸಾಭೀತಾಗಿದ್ದು, ಆರೋಪಿಯ ಮೇಲೆ ಪೋಕ್ಸೊ ಮತ್ತು SCST ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.