ಕಲಬುರಗಿ: ಜಡಿಮಳೆಯಲ್ಲೇ ಕಲ್ಲಂತೆ ನಿಂತು ವಿದ್ಯಾರ್ಥಿನಿಯರ ಸಮೂಹ ಧರಣಿ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದಿದೆ. ಮಳೆ ಬಂದರೂ ಜಗ್ಗದೆ, ಕರೋನಾ ಭಯಕ್ಕೂ ಕೇರ್ ಮಾಡದೆ ತಮ್ಮ ಊರಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪ್ಸಿಸುವಂತೆ ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಬಸ್ ಮುಂದೆನೇ ನಿಂತು ಈ ಪ್ರತಿಭಟನೆ ನಡೆಸಿದ, ತಮ್ಮ ಕಲ್ಯಾಣ ಕರ್ನಾಟಕ ಸಾರಿಗೆ ಅಧ್ಯಕ್ಷರು ತಮ್ಮದೇ ಕ್ಷೇತ್ರದವರಾದರು ತಮ್ಮ ಊರಿಗೆ ಸಾರಿಗೆ ಸೌಲಭ್ಯ ನೀಡದಿರುವುದರ ಕುರಿತು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಶಕ್ತಿ ರೂಪಿಣಿಯರಂತೆ ಈಗಲೇ ಹೋರಾಟಕ್ಕೆ ಇಳಿದಿರುವ ಇವರು ಭವ್ಯ ಭಾರತದಲ್ಲಿ ಖಂಡಿತವಾಗಿಯೂ ಆಶಾವಾದವಾಗಿದ್ದಾರೆ.