ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮೂವರು ದರೋಡೆಕೋರರ ತಂಡ ಈ ಅಟ್ಟಹಾಸ ಮೆರೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಮಳಿಗೆ ಅಟ್ಯಾಕ್ ಮಾಡಲಾಗಿದೆ.

ಬೈಕ್ ನಲ್ಲಿ ದಿಡೀರ್ ಬಂದಿಳಿದ ಮೂವರು ಅಂಗಡಿಯಲ್ಲಿ ಚಿನ್ನ, ಬೆಳ್ಳಿ ಕದಿಯಲು ಮುಂದಾದಾಗ, ಮಾಲೀಕರಾದ ಧರ್ಮೇಂದ್ರ ತಡೆಯಲು ಪ್ರಯತ್ನಿಸಿದ್ದಾರೆ.  ಆದರೆ ಮಾಲಿಕನ ಮೇಲೆ ಗುಂಡಿನ ದಾಳಿ ನಡೆಸಿ, ಹೊರಗೆ ಹೋಗುವಾಗ ರಸ್ತೆಯಲ್ಲಿ ಕಂಡ ದಡದಹಳ್ಳಿ ಗ್ರಾಮದ ಚಂದ್ರು ಮೇಲೆ ಶೂಟ್ ಮಾಡಿದ್ದಾರೆ.  ಆತ ತೀವ್ರವಾದ ರಕ್ತಸ್ತ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಾಲಿಕ ಧರ್ಮೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಶ್ವಾನ ದಳದೊಂದಿಗೆ ಬಂದ ಪೋಲೀಸರು ಕಳ್ಳರ ಪತ್ತೆಗೆ ಹುಡುಕಾಡಿದ್ದಾರೆ.  ಶ್ವಾನದಳ ಘಟನೆ ನಡೆದ ಸುತ್ತಾಮುತ್ತಾ ಓಡಾಡುತ್ತಿತ್ತು ಎಂಬುದನ್ನು ಗಮನಿಸಿದರೆ ಬಹುಶಃ ಕಳ್ಳರು ಅಲ್ಲೇ ಅವಿತುಕೊಂಡಿರುವ ಗುಮಾನಿ ಮೂಡುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಕಳ್ಳರು ಚಿನ್ನ ಮಾತ್ರ ತೆಗೆದುಕೊಂಡು ಬೆಳ್ಳಿಯನ್ನು ಬಿಟ್ಟು ತರಾತುರಿಯಲ್ಲಿ ಓಡಿದ್ದಾರೆ.