ಮೇಷರಾಶಿ

ಅದೃಷ್ಟವು ಇಂದು ನಿಮ್ಮ ಜತೆಗಿದೆ. ಕ್ಲಿಷ್ಟಕರ ಪರಿಸ್ಥಿತಿಯೂ ಸುಗಮವಾಗಿ ಪರಿಹಾರ ಕಾಣುವುದು. ಕೌಟುಂಬಿಕ ಉದ್ವಿಗ್ನತೆ ಶಮನ, ಶಾಂತಿ. ಮಕ್ಕಳ ಸಾಧನೆ ಸಂತಸ ತರಲಿದೆ, ಹಿರಿಯರ ಸಲಹೆ ಆಲಿಸಿ, ಅಧಿಕ ಶ್ರಮದಿಂದ ಆರ್ಥಕವಾಗಿ ಅಭಿವೃದ್ದಿ, ಅಧಿಕಾರ-ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ವಾಹನ ಯೋಗ, ಮನಃಶಾಂತಿ, ಹಿತಶತ್ರುಗಳಿಂದ ತೊಂದರೆ, ಅನ್ಯ ಜನರಲ್ಲಿ ವೈಮನಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ವೃಷಭರಾಶಿ
ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸುತ್ತೀರಿ. ಅದಕ್ಕೆ ಕೆಲವರಿಂದ ಅಡ್ಡಿ ಒದಗುತ್ತದೆ. ನಿಮ್ಮ ಏಳಿಗೆ ಸಹಿಸದವರೂ ಹತ್ತಿರದಲ್ಲೆ ಇದ್ದಾರೆ ಎಂಬುದು ಅರಿಯಿರಿ. ದೂರದ ಬಂಧುಗಳ ಸಹಕಾರ, ಉದ್ಯೋಗದಲ್ಲಿ ಅಭಿವೃದ್ದಿ, ಆಸ್ತಿ ಖರೀದಿಯಲ್ಲಿ ಲಾಭ, ಮಿತ್ರರ ಭೇಟಿ, ದೇವತಾ ಕಾರ್ಯಗಳಲ್ಲಿ ಒಲವು, ಗುರು ಹಿರಿಯರಲ್ಲಿ ಭಕ್ತಿ, ಶ್ರಮಕ್ಕೆ ತಕ್ಕ ಫಲ, ಷೇರು ವ್ಯವಹಾರಗಳಲ್ಲಿ ನಷ್ಟ, ನಿಂದನೆ ಅಪವಾದಗಳು.

ಮಿಥುನರಾಶಿ
ನಿಮ್ಮ ಕರ್ತವ್ಯಕ್ಕೆ ಅಡ್ಡಿ ತರುವ ಬೆಳವಣಿಗೆ. ಅದನ್ನು ನಿಭಾಯಿಸಲು ಹೆಣಗುವಿರಿ. ಬಯಸಿದ ನೆರವು ದೊರಕುವುದಿಲ್ಲ. ಆರ್ಥಿಕ ಸಂಕಷ್ಟ ಕಾಡುತ್ತದೆ. ಧೈರ್ಯದಿಂದ ಕಾರ್ಯಸಾಧನೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸುಖಪ್ರಾಪ್ತಿ, ಆಹಾರ ಸೇವನೆಯಲ್ಲಿ ಎಚ್ಚರ, ವಿದ್ಯಾರ್ಥಿಗಳಲ್ಲಿ ಆತಂಕ, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯ ಅನುಕೂಲ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಕಟಕರಾಶಿ
ನೀವಿಂದು ಮಾಡುವ ಕೆಲಸದಲ್ಲಿ ಮನಸ್ಸು, ದೇಹ ಎಲ್ಲ ವನ್ನೂ ಸುರಿಯುತ್ತೀರಿ. ಆದರೆ ಫಲಿತಾಂಶ ಮಾತ್ರ ನೀವು ಬಯಸಿದಂತೆ ಸಿಗುವುದಿಲ್ಲ. ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ, ನಿರೀಕ್ಷೆಗೂ ಮೀರಿದ ಧನ ಸಂಪತ್ತು. ಆಧ್ಯಾತ್ಮದ ಕಡೆಗೆ ಒಲವು, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಭಯ ನಿವಾರಣೆ.

ಸಿಂಹರಾಶಿ
ಕಳೆದ ಸಮಯ ಮತ್ತೆ ಬಾರದು. ಇದನ್ನು ನೀವಿಂದು ನೆನಪಿಟ್ಟು ಕೊಳ್ಳಬೇಕು. ಕಾಲಹರಣ ಮಾಡಿ ಕೆಲಸವನ್ನು ಕೆಡಿಸಿಕೊಳ್ಳದಿರಿ. ದೂರ ಪ್ರಯಾಣ, ಉತ್ತಮ ಸಂಪತ್ತು ವೃದ್ದಿ, ಆರೋಗ್ಯದಲ್ಲಿ ಸ್ಥಿರ, ಸಾಮಾಜಿಕವಾಗಿ ಜನಮನ್ನಣೆ ದೊರೆಯಲಿದೆ, ಸ್ತ್ರೀಯರಿಗೆ ಶುಭ, ಮಕ್ಕಳಿಗೆ ಅಗತ್ಯ ಖರ್ಚು, ಪರರಿಗೆ ವಂಚನೆ, ದಿನ ಬಳಕೆ ವಸ್ತುಗಳಿಂದ ಲಾಭ, ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ.

ಕನ್ಯಾರಾಶಿ
ಮನದೊಳಗಿನ ಅತಿ ಸಣ್ಣ ಭಾವನೆಗೂ ಬೆಲೆಕೊಡಿ. ಅದುವೇ ಇಂದು ಭಾವತೀವ್ರತೆಗೆ ಕಾರಣವಾಗಬಹುದು. ಪ್ರೀತಿಗಾಗಿ ಹಂಬಲಿಸುವಿರಿ. ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ, ಮಾನಸಿಕವಾಗಿ ಚಿಂತೆ ಮಾಡಬೇಡಿ, ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ, ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅನಾರೋಗ್ಯ,ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಮೂಲ್ಯ ವಸ್ತುಗಳ ಖರೀದಿ, ಶತ್ರು ನಾಶ, ದಾಂಪತ್ಯದಲ್ಲಿ ಪ್ರೀತಿ.

ತುಲಾರಾಶಿ
ಸಾಮಾಜಿಕವಾಗಿ, ವೃತ್ತಿ ಕ್ಷೇತ್ರದಲ್ಲಿ  ನೀವಿಂದು ಪ್ರಸಿದ್ಧಿ ಪಡೆಯುವಿರಿ. ಆದರೆ ಕೌಟುಂಬಿಕವಾಗಿ ಅನಾದರ. ಮನೆಯಲ್ಲಿ ನಿಮ್ಮ ವರ್ತನೆಗೆ ಟೀಕೆ ಎದುರಿಸುವಿರಿ. ಸಾಂಸಾರಿಕವಾಗಿ ನೆಮ್ಮದಿ, ಬುದ್ದಿವಂತಿಕೆಯಿಂದ ಕಾರ್ಯಸಾಧನೆ, ಸ್ವತಃ ಪರಿಶ್ರಮ ಗೆಲುವು, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧ ರೋಗಗಳು, ಅನಾರೋಗ್ಯ, ಸ್ವಂತ ವಿಷಯಗಳತ್ತ ಗಮನ ಕೊಡಿ, ದ್ರವ್ಯಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ.

ವೃಶ್ಚಿಕರಾಶಿ
ಸಣ್ಣ ಯಶಸ್ಸಿನಿಂದ ಮೈಮರೆಯಬೇಡಿ. ದೊಡ್ಡ ಕಷ್ಟ ಹತ್ತಿರದಲ್ಲೇ ಕಾದಿರಬಹುದು. ವೃತ್ತಿಯಲ್ಲಿ ಸದಾ ಜಾಗೃತರಾಗಿರುವುದೇ ಒಳ್ಳೆಯದು. ಮನೆಯಲ್ಲಿ ಸಂತಸದ ವಾತಾವರಣ, ಗೃಹದಲ್ಲಿ ಸಂತಸದ ವಾತಾವರಣ, ಸ್ವಾಭಿಮಾನದಿಂದ ಗೌರವ, ಆದಾಯಕ್ಕಿಂತ ಖರ್ಚು ಜಾಸ್ತಿ, ಹಿತ ಶತ್ರು ಭಾದೆ, ತೀರ್ಥಯಾತ್ರಾ ದರ್ಶನ, ಮನಃಶಾಂತಿ, ಪರರಿಗೆ ಸಹಾಯ ಮಾಡುವಿರಿ, ಸುಖ ಭೋಜನ, ಸ್ಥಿರಾಸ್ತಿ ಮಾರಾಟದಿಂದ ಲಾಭ.

ಧನಸ್ಸುರಾಶಿ

ಪ್ರೀತಿಪಾತ್ರರು ಮೆಚ್ಚುವಂತಹ ಕಾರ್ಯ ಮಾಡುವಿರಿ. ಅವರ ಆರಾಧನೆಗೆ ಪಾತ್ರರಾಗುವಿರಿ. ಕೆಲವರು ನಿಮ್ಮಿಂದ ನೆರವು ಅಪೇಕ್ಷಿಸುವರು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ದೂರ ವ್ಯವಹಾರಗಳಿಂದ ಧನಾರ್ಜನೆ ವೃದ್ದಿ, ಹೊಸ ಹೂಡಿಕೆ ಲಾಭವನ್ನು ತರಲಿದೆ, ಬಂಧು ಮಿತ್ರರ ಆಗಮನ, ವಿಪರೀತ ಖರ್ಚುಗಳು, ಶತ್ರು ಬಾಧೆ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ಸ್ಥಳ ಬದಲಾವಣೆ.

ಮಕರರಾಶಿ
ನಿಮ್ಮ ಕಠಿಣ ಪರಿಶ್ರಮ ವಿಫಲವಾಗುತ್ತದೆ. ಕೆಲವರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಯಬಹುದು. ಕೌಟುಂಬಿಕವಾಗಿಯೂ ಒತ್ತಡದ ಸ್ಥಿತಿ. ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿಬರಲಿದೆ, ನಾಯಕತ್ವ ಗುಣವನ್ನು ರೂಢಿಸಿಕೊಳ್ಳಿ, ಪ್ರಯಾಣದಿಂದ ಲಾಭ, ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ನಂಬಿಕಸ್ತರಿಂದ ಅಶಾಂತಿ, ಆಲಸ್ಯ ಮನೋಭಾವ, ಎಲ್ಲಾ ರೀತಿಯ ಸಮಸ್ಯೆ, ಧನವ್ಯಯ.

ಕುಂಭರಾಶಿ
ಕೆಲ ವಿಚಾರಗಳನ್ನು ಸರಿಪಡಿಸುವುದು ಒಳಿತು. ನಿಮ್ಮ ಆರ್ಥಿಕತೆ, ನಿಮ್ಮ ಮನೆಯ ಸ್ಥಿತಿ, ನಿಮ್ಮ ಕಚೇರಿ ವಾತಾವರಣ ಸರಿಪಡಿಸಿಕೊಳ್ಳಿ. ಗುರುಹಿರಿಯರ ಆರೋಗ್ಯದಲ್ಲಿ ವೃದ್ದಿ, ಉದ್ಯೋಗ ವ್ಯವಹಾರದಲ್ಲಿ ಅಧಿಕ ಧನಾರ್ಜನೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಗುರುಗಳಿಂದ ಬೋಧನೆ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀಯರಿಗೆ ಶುಭ, ವಿನಾಕಾರಣ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ, ಧನಲಾಭ.

ಮೀನರಾಶಿ
ತಪ್ಪು ಮಾಡುವುದು ಸಹಜ. ಅದನ್ನು ಒಪ್ಪಿಕೊಳ್ಳುವ ದೊಡ್ಡತನ ಪ್ರದರ್ಶಿಸಿ. ಯಾರನ್ನೋ ಮೆಚ್ಚಿ ಸಲು ಹೋಗಿ ಮಾನ ಕಳಕೊಳ್ಳದಿರಿ. ಧಾರ್ಮಿಕ ಕಾರ್ಯಗಳಲ್ಲಿ ಗೆಲುವು, ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ, ಮಾನಸಿಕವಾಗಿ ನೆಮ್ಮದಿ, ದೇವತಾ ಕ್ಷೇತ್ರಗಳಿಗೆ ಭೇಟಿ, ಸಹೋದರರಿಂದ ಸಹಕಾರ, ಯೋಚಿಸಿ ಕೆಲಸ ಮಾಡಿ, ಸಾಲಭಾದೆ, ಉತ್ತಮ ಬುದ್ಧಿಶಕ್ತಿ, ಸ್ವಂತ ಪರಿಶ್ರಮದಿಂದ ಯಶಸ್ಸು, ವ್ಯಾಪಾರಿಗೆ ಲಾಭ, ಮನಃಶಾಂತಿ