ಮೈಸೂರಿನಲ್ಲಿ ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸ ಮಾಡಲು ಜನ (Job Alert 2022) ಬೇಕಾಗಿದ್ದಾರೆ. ಮೈಸೂರಿನಲ್ಲಿ ಒಂದು – ಒಂದೂವರೆ ವರ್ಷದ ತಾಳೆಗರಿ ಸಂರಕ್ಷಣೆಗೆ ಅರ್ಹ ಅಭ್ಯರ್ಥಿಗಳಿಂದ ಉತ್ತಮ ಉದ್ಯೋಗಾವಕಾಶಕ್ಕೆ (Job Alert In Mysuru) 2022 ಅರ್ಜಿ ಆಹ್ವಾನಿಸಲಾಗಿದೆ. ತಜ್ಞರು ಸೂಚಿಸುವ ಅಧಿಕೃತ ವಿಧಾನಗಳಿಂದ ಅವುಗಳನ್ನು ಶುದ್ಧೀಕರಿಸುವುದು, ಸಂಸ್ಕರಿಸುವುದು, ಅವುಗಳ ಛಾಯಾ ಡಿಜಿಟಲೀಕರಣ ಮತ್ತು ಅವುಗಳ ಗ್ರಂಥಸೂಚಿಯ ಡಿಜಿಟಲ್‌ ಪ್ರತಿಯನ್ನು ರೂಪಿಸುವುದು ಉದ್ಯೋಗದ ಮುಖ್ಯ ಕೆಲಸವಾಗಿರಲಿದೆ. ಈ ಯೋಜನೆಗೆ ಸಂಬಂಧಿಸಿದ ಯೋಜನೆಯೊಂದು ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದ್ದು ಅದರ ತಂಡವನ್ನು ಸೇರಲು ಆಸಕ್ತರಿಗೆ ಆಹ್ವಾನವಿದೆ ಎಂದು ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾಗಿರುವ ಬೇಳೂರು ಸುದರ್ಶನ ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ವಿವರ ಹಂಚಿಕೊಂಡಿದ್ದಾರೆ.

ಅನುಭವ, ವಿದ್ಯಾರ್ಹತೆ ಆಧಾರದಲ್ಲಿ ಯೋಜನಾ ಸಮನ್ವಯಕಾರ, ತಂಡ ನಾಯಕ ಮತ್ತು ಯೋಜನಾ ಸಹಾಯಕ, ಡಿಜಿಟಲ್‌ ಛಾಯಾಗ್ರಾಹಕ – ಈ ನಾಲ್ಕು ಬಗೆಯ ತಾತ್ಕಾಲಿಕ ಉದ್ಯೋಗಾವಕಾಶಗಳಿವೆ. ಈ ಮಾಹಿತಿಯನ್ನು ಆಸಕ್ತರಿಗೆ ತಲುಪಿಸಲು ವ್ಯಾಪಕವಾಗಿ ಹಂಚಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: World Radio Day 2022: ಧಾವಂತದ ಜಗತ್ತಿನಲ್ಲಿ ಆಕಾಶವಾಣಿ ಹಿಂದೆಂದಿಂಗಿಂತಲೂ ಪ್ರಸ್ತುತ; ಕೂ ವಾರದ ಚರ್ಚೆಯಲ್ಲಿ ಹರ್ಷವರ್ಧನ ಶೀಲವಂತ ಅಭಿಪ್ರಾಯ

(Job News 2022 Palm leaves conversation job in Mysuru)