ಚಿಕ್ಕಮಗಳೂರು: ಇಲ್ಲಿನ ನಮೋ ಬ್ರಿಗೇಡ್ ವತಿಯಿಂದ ನಗರದ ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ಫೆ.೮ ರಂದು ಗುರುವಾರ ಸಂಜೆ ೬ ಗಂಟೆಗೆ ನಮೋ ಭಾರತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಬ್ರಿಗೇಡ್ ಮುಖಂಡ ಚಂದ್ರಶೇಖರ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಸಾಹಿತಿ, ವಾಗ್ಮಿ, ಚಕ್ರವರ್ತಿ ಸೂಲಿಬೆಲೆಯವರು ಉಪನ್ಯಾಸ ನೀಡಲಿದ್ದಾರೆ ಎಂದರು.

ಚಕ್ರವರ್ತಿಯವರು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ವಿಶ್ವವೇ ನಿಬ್ಬೆರಗಾಗುವಂತ ಸಾಧನೆಗಳ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ಅವಿಸ್ಮರಣೀಯ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಸಾವಿರಾರು ಹಳ್ಳಿಗಳನ್ನು ಸಂಪರ್ಕಿಸಿ ಕೊಂಡು ಬಂದಿರುವ ನಮೋ ಬ್ರಿಗೇಡ್‌ನ ಎರಡನೇ ಹನುಮರಥದ ಮುಕ್ತಾಯ ಸಮಾರಂಭ ಇದೇ ದಿನ ಜರುಗಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಿಗೇಡ್ ಮುಖಂಡರುಗಳಾದ ಪ್ರಶಾಂತ್, ಚಂದ್ರಕಲಾ, ಮೇಘ, ದಾಮೋದರ್, ಪುನೀತ್ ಆರಾಧ್ಯ ಉಪಸ್ಥಿತರಿದ್ದರು

NamoBharat program by NamoBrigade in the city on Feb. 8