ಚಿಕ್ಕಮಗಳೂರು: ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ವತಿಯಿಂದ ನಡೆಯುತ್ತಿರುವ ಆಶ್ರಮ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕೆಗಾಗಿ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಗೌರವಧನದ ಆಧಾರದ ಮೇಲೆ ಆಂಗ್ಲಭಾಷೆಯ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು. ಆಸಕ್ತ ಅಭ್ಯರ್ಥಿಗಳು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿಯನ್ನು ಪಡೆದು, ಆಗಸ್ಟ್ 30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ದೂ.ಸಂ: 08262-238855, ಮೂಡಿಗೆರೆ ದೂ.ಸಂ: 08262-222117, ಕೊಪ್ಪ ದೂ.ಸಂ: 08265-222892, ಶೃಂಗೇರಿ ದೂ.ಸಂ: 08265-250437, ಕಡೂರು  ದೂ.ಸಂ: 08263-223358, ನ.ರಾಪುರ-08266-220829, ತರೀಕೆರೆ ದೂ.ಸಂ: 08261-295326 ಮತ್ತು ಚಿಕ್ಕಮಗಳುರು ಜಿಲ್ಲಾ ಪಂಚಾಯಿತಿ, ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ದೂ.ಸಂ: 08262-220779, 8310291951 ನ್ನು ಸಂಪರ್ಕಿಸುವಂತೆ ಚಿಕ್ಕಮಗಳೂರು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.