ಅಹ್ಮದಾಬಾದ್: ಹಿಂದೂ ದೇವ ದೇವತೆಗಳನ್ನು ಅಶ್ಲೀಲವಾಗಿ ತೋರಿಸಿದೆ ಎಂಬ ಆರೋಪ ಹೊರಿಸಿ, ಕಾಮಸೂತ್ರ ಗ್ರಂಥವನ್ನು ಭಜರಂಗ ಧಳದ ಕಾರ್ಯಕಸ್ತರು ಪುಸ್ತಕ ಮಳಿಗೆಯೊಂದರ ಮುಂದೆಯೇ ಸುಟ್ಟುಹಾಕಿದ ಘಟನೆ ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದಿದೆ.

ಭಾರತೀಯ ತತ್ವಜ್ನಾನಿ ವಾತ್ಸಾಯನ ಸಂಸ್ಕೃತದಲ್ಲಿ ಪ್ರೀತಿ, ಲೈಂಗಿಕತೆಯ ಬರೆದಿರುವ ಗ್ರಂಥ ಇದಾಗಿತ್ತು. ಪುಸ್ತಕಕ್ಕೆ ಬೆಂಕಿ ಇಟ್ಟ ವೇಳೆ ಕಾರ್ಯಕರ್ತರು ಆಕ್ರೋಶದಿಮ್ದ ಜೈ ಶ್ರೀರಾಂ, ಹರಹರ ಮಹಾದೇವ್ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ.  ಈ ವಿಡಿಯೋ ವೈರಲ್ ಆಗಿದ್ದು, ಘಟನೆ ಯಾವ ಪುಸ್ತಕ ಮಳಿಗೆಯ ಮುಂದೆ ನಡೆದಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂಬ ವಿಷಯವನ್ನು scroll.in ವರದಿ ಮಾಡಿದೆ.

ಇಂಡಿಯಾ ಟುಡೇ ವರದಿ ಪ್ರಕಾರ, ವಾತ್ಸಾಯನ ಬರೆದಿರುವ ಕಾಮಸೂತ್ರ ಪುಸ್ತಕ ಮಾರಾಟ ಮಾಡುವ ಪುಸ್ತಕ ಮಳಿಗೆಯನ್ನೇ ಸುಟ್ಟುಹಾಕುವುದಾಗಿ ಭಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.