ಸುಬ್ರಮಣ್ಯ: ಜಿಲ್ಲಾಧಿಕಾರಿಗಳ ಆದೇಶದಂತೆ, ಕೋವಿಡ್ ಗೆ ಕಡಿವಾಣ ಹಾಕುವ ಉದ್ದೇಶದಿಂದ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಆಗಸ್ಟ್ ೩೦ರವರೆಗೆ ಯಾವುದೇ ಸೇವೆಗಳಿರುವುದಿಲ್ಲ, ದೇವರ ದರ್ಶನ ಮಾತ್ರ ಅವಕಾಶ ನೀಡಲಾಗಿದೆ.

ದೇವಾಲಯದಲ್ಲಿ ತೀರ್ಥ, ಪ್ರಸಾಧ, ವಿನಿಯೋಗ, ಅನ್ನ ಸಂತರ್ಪಣೆ ಬಂದ್ ಮಾಡಲಾಗಿದೆ, ವಿಕೆಂಡ್ ದರ್ಶನಕ್ಕೂ ನಿರ್ವಂಧ ಹೇರಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

ವಾರದ ದಿನಗಳಲ್ಲಿ ಬೆಳಿಗ್ಗೆ ೭ರಿಂದ ಮಧ್ಯಾಹ್ನ ೧೧:೩೦ರ ತನಕ, ಮಧ್ಯಾಹ್ನ ೧೨:೧೫ ರಿಂದ ೧-೩೦ ಹಾಗೂ ೨-೩೦ ರಿಂದ ಸಂಜೆ ಏಳರ ವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.  ಮಂಗಳಾರತಿ ಮಾತ್ರ ನಡೆಯಬಹುದಾಗಿದೆ, ವಾರಾಂತ್ಯದಲ್ಲಿ ಕ್ಷೇತ್ರದ ವಸತಿಗೃಹಗಳಲ್ಲಿ ಉಳಿಯಲು ಅವಕಾಶವಿರುವುದಿಲ್ಲ.

ಜೊತೆಗೆ ವಾರಾದ ದಿನ ಉಳಿಯುವವರು ೭೨ ಗಂಟೆಗಳೊಳಗಿನ RTPCR negative ಪ್ರಮಾಣಪತ್ರ ಕಡ್ಡಾಯವಾಗಿ ಸಲ್ಲಿಸತಕ್ಕದ್ದಾಗಿದೆ.