ಚಿಕ್ಕಮಗಳೂರು(ಕನ್ನಡನಾಡಿ ಸುದ್ದಿಜಾಲ): ಆನೆ ಸರಂಕ್ಷಣೆ ಕುರಿತು ಸಾರ್ವಜನಿಕ ಸ್ಥಳದಲ್ಲೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡುವ ಮೂಲಕ ಕೆ.ಆರ್. ಪೇಟೆಯಲ್ಲಿ ಆನೆ ದಿನಾಚರಣೆ ಆಚರಿಸಲಾಗಿದೆ.

ಇದೇ ಸಂಧರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಪ್ರಸಾದ್ , ಸದಸ್ಯ ಮಂಜುನಾಥ್, ವನ್ಯ ಜೀವಿ ಪರಿಪಾಲಕ ಜಿ. ವಿರೇಶ್, ಅರಣ್ಯ ಅಧಿಕಾರಿ ಸ್ವಾತಿ ಮೊದಲಾದವರು ಆನೆ ಸಂರಕ್ಷಣೆ ಕುರಿತು ಅರಿವು ಮೂಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ವೈಲ್ಡ್ ಕೇರ್ ನ ಮೂಗ್ತಿಹಳ್ಳಿ ಮಧು, ಕೆ. ಆರ್ ಪೇಟೆ ಗಸ್ತಿನ ಅರಣ್ಯ ರಕ್ಷಕ ಗೌರೀಶ್, ಪಿಡಿಒ ಗಂಗಾಧರ್ ಸೇರಿದಂತೆ  ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.