ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಭಾರೀ ಪ್ರಚಾರ ಪಡೆದುಕೊಂಡಿದ್ದ ಬಿಗ್ ಬಾಸ್ ೮ನೇ ಸೀಸನ್ ನಲ್ಲಿ ಮಂಜು ಪಾವಗಡ ವಿನ್ನರ್ ಎಂದು ಭಾನುವಾರ ರಾತ್ರಿ ಪ್ರಸಾರವಾದ ಭರ್ಜರಿ ಕಾರ್ಯಕ್ರಮದಲ್ಲಿ ನಟ ಸುಧೀಪ್ ಈ ಘೋಷಣೆ ಮಾಡಿದ್ದಾರೆ.

120 ದಿನಗಳ ಸುದೀರ್ಘ ಯಾನದಲ್ಲಿ ಸಾಕಷ್ಟು ಸ್ಪರ್ಧಿಗಳನ್ನು ವಿಜೇತರು ಎದುರಿಸಬೇಕಾಗಿತ್ತು.  ಈ ಎಲ್ಲಾ  ಸವಾಲುಗಳನ್ನು ಎದುರಿಸಿ ಗೆಲುವು ಸಾಧಿಸಿದ ಮಂಜು ಪಾವಗಡ ಅವರಿಗೆ ೫೩ಲಕ್ಷ ರೂ.ಬಹುಮಾನ, ರನ್ನರ್ ಅಪ್ ಆದ ಕೆ.ಪಿ. ಅರವಿಂದ್ 11 ಲಕ್ಷದ ಬಹುಮಾನ ಪಡೆದಿದ್ದಾರೆ.

ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿದ ಈ ಇಬ್ಬರು ಸ್ಪರ್ಧಿಗಳು ಸಂತಸದ ಅಲೆಯಲ್ಲಿ ತೇಲಿದ್ದಾರೆ. ಮೊದಲ ಸೀಸನ್ ಇನ್ನಿಂಗ್ಸ್ ನಲ್ಲಿ 37 ದಿನ, ಎರಡನೇ ಇನ್ನಿಂಗ್ಸ್ ನಲ್ಲಿ 84 ದಿವಸ ನಡೆದ ರಿಯಾಲಿಟಿ ಷೋ, ಇಪ್ಪತ್ತು ಸ್ಪರ್ಧಿಗಳಿಂದ ಪ್ರಾರಂಭವಾಗಿತ್ತು.  ಕೊನೆಯ ಹಣಾಹಣಿಯಲ್ಲಿ ಟಾಪ್ 5 ಸ್ಪರ್ಧಿಗಳಾಗಿ ಮಂಜು ಪಾವಗಡ, ಅರವಿಂದ್, ವೈಷ್ಣವಿ, ಪ್ರಶಾಂತ್ ಸಬರಗಿ ಹಾಗೂ ದಿವ್ಯಾ ಉರುಗಡ ಇದ್ದರು.

ಅತ್ಯಂತ ಹೆಚ್ಚು ದಿನಗಳ ಕಾಲ ಅಂದರೆ ೧೨೦ ದಿನಗಳವರೆಗೆ ನಡೆದ ಹಣಾಹಣಿ ಇದಾಗಿದ್ದು, ತೀವ್ರ ಕುತೂಹಲ ಕೆರಳಿಸಿತ್ತು.