ಚಿಕ್ಕಮಗಳೂರು (ಕನ್ನಡನಾಡಿ ಸುದ್ದಿ ಜಾಲ):  ಕಳಸ ತಾಲ್ಲೂಕು ತೋಟದೂರು ಗ್ರಾಮ ಪಂಚಾಯತಿ ಬಾಳೆಹೊಳೆ ಪಡೀಲ್ ಬಳಿ ಹತ್ತು ಚಕ್ರದ  ಲಾರಿಯಲ್ಲಿ ಸರಕು ಸಾಗಿಸುತ್ತಿದ್ದ ವೇಳೆ ಲಾರಿಗೆ ವಿದ್ಯುತ್ ತಂತಿ ತಾಗಿದ್ದು  ಈ ಅವಘಡ ಘಟಿಸಿದೆ.

ಮೃತ ದುರ್ದೈವಿಯು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು ೩೫ ವಯಸ್ಸಿನವರಾಗಿದ್ದರು.  ತಡರಾತ್ರಿ ೨ ಗಂಟೆ ವೇಳೆಯಲ್ಲಿ ಲಾರಿಗೆ ವಿದ್ಯುತ್ ತಂತಿ ತಗುಲಿದ ಘಟನೆ ಜರುಗಿತ್ತು.

ರಫೀಕ್ ತರೀಕೆರೆ ನಿವಾಸಿಯಾಗಿದ್ದು ಕಳಸ ಪಿಎಸ್ ಐ ಹರ್ಷವರ್ಧನ್ ಹಾಗೂ ಪೋಲೀಸ್  ಸಿಬ್ಬಂದಿ ತಕ್ಷಣವೇ ತೆರಳಿ ಪರಿಶೀಲನೆ ನಡಸಿದ್ದಾರೆ.ಅಂಬ್ಯುಲೆನ್ಸ್ ಚಾಲಕ ಶರೀಫ್ ಕೂಡಲೇ ತೆರಳಿ ಶವವನ್ನು ಕಳಸ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.