ಕೊಟ್ಟಿಗೆಹಾರ: ಹೊರಜಿಲ್ಲೆಯವರು ನಡೆಸುತ್ತಿರುವ ಹೈಟೆಕ್ ಚಾರಣ ದಂದೆ ಸ್ಥಳೀಯರ ಹಾಗೂ ಸರ್ಕಾರದ ಆದಾಯಕ್ಕೆ ಫಂಗನಾಮ ಹಾಕುತ್ತಿದೆ ಇದನ್ನು ತಡೆಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪ ಇರುವ ಸುಂಕಸಾಲೆ, ರಾಣಿಝರಿ, ಬಲ್ಲಾಳರಾಯನ ದುರ್ಗ, ಬಂಡಾಜೆ ಪಾಲ್ಸ್ ಮೊದಲಾದ ಅರಣ್ಯ ಭಾಗಗಳಲ್ಲಿ ಹೊರ ಜಿಲ್ಲೆಯವರು ಚಾರಣ ಏರ್ಪಡಿಸುತ್ತಾರೆ. ಮೈಸೂರು, ಬೆಂಗಳೂರು ಕಡೆಯಿಂದ ಕರೆದು ತರೋ ಪ್ರವಾಸಿಗರಿಂದ ಬರೋಬ್ಬರಿ ಮೂರ್ನಾಲ್ಕು ಸಾವಿರ ಹಣ ಪೀಕುತ್ತಾರೆ.

ಪರ್ಯಾಯ ಆದಾಯ ಮೂಲಗಳಾಗಿ ಹೋಸ್ಟೇ ತೆರೆದಿದ್ದು, ಇಲ್ಲಿಗೆ ಬರೋ ಪ್ರವಾಸಿಗರನ್ನು ಸಹ ಹೈಟೆಕ್ ಚಾರಣ ದಂದೆಗೆ ಕರೆದೊಯ್ಯುತ್ತಿರುವುದರಿಂದ ಇವರ ಆದಾಯಕ್ಕೆ ಕತ್ತರಿ ಬೀಳುತ್ತಿದೆ. ಸರ್ಕಾರ ಹೈಟೆಕ್ ಚಾರಣಕ್ಕೆ ಕಡಿವಾಣ ಹಾಕಿ, ಸ್ಥಳಿಯರಿಗೆ ಆಗುತ್ತಿರುವ ತಪ್ಪಿಸಬೇಕೆಂದು ಪರಿಸರ ಪ್ರೇಮಿ ಸಂಜಯ ಗೌಡ ಒತ್ತಾಯಿಸಿದ್ದಾರೆ.