ತಿರುವನಂತಪುರಂ: ಕರಿಪುರ ವಿಮಾನ ನಿಲ್ದಾಣದಲ್ಲಿ 1.5 ಕೋಟಿ ಮೌಲ್ಯದ ಚಿನ್ನ ವಶ  ಮೂವರಿಂದ 2.675 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.  ಮೂವರು ಪ್ರಯಾಣಿಕರು ಸೇರಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಸ್ಟಮ್ಸ್ ತಪಾಸಣೆ ಮುಗಿಸಿ ಹೊರಗಡೆ ಬಂದ ಮೇಲೆ ಇವರನ್ನು ಬಂಧಿಸಲಾಗಿದೆ.  ದೇಹದ ರಹಸ್ಯ ಭಾಗಗಳಲ್ಲಿ  ಅಡಗಿಸಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ದುಬೈನಿಂದ ಬಂದಿಳಿದ ಕಾಞಂಗಾಡ್ ನಿವಾಸಿ ಅಫ್ರುದ್ದೀನ್, ಶಾರ್ಜಾ ದಿಂದ ಬಂದ ಕಣ್ಣೂರು ನಿವಾಸಿ ಇ.ಕೆ.ಆಬಿದ್ ಮತ್ತು ಮಲಪ್ಪುರಂ ವಜಿಕ್ಕಡವು ನಿವಾಸಿ ಎಡತೋಡಿಕ ಆಸಿಫಾಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.  ಒಂದೂವರೆ ತಿಂಗಳಲ್ಲಿ ಕರಿಪುರದಲ್ಲಿ 12 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

1.5 crore worth of gold seized at airport