ಚಿಕ್ಕಮಗಳೂರು: ಖಾಕಿ ತೊಟ್ಟ ಪೊಲೀಸರಿಂದ ರಸ್ತೆ ಕಾಮಗಾರಿ ನಡೆದಿದೆ. ಗುದ್ದಲಿ, ಪಿಕಾಸಿ ಹಿಡಿದು ರೋಡ್ ರಿಪೇರಿ ಮಾಡಿದ್ದಾರೆ.

ಜಿಲ್ಲೆಯ ದತ್ತಪೀಠದ ರಸ್ತೆಯಲ್ಲಿ ಗುಂಡಿಗಳಿದ್ದು, ಗುಂಡಿ ರಸ್ತೆಯಲ್ಲಿ ಸಂಚರಿಸಲಾಗದೆ ಪ್ರವಾಸಿಗರು ಒದ್ದಾಡುತ್ತಿದ್ದರು.

ರಸ್ತೆ ರಿಪೇರಿಗೆ ಮನವಿ ಮಾಡಿದರೂ ಇಲಾಖೆ ಗುಂಡಿ ಮುಚ್ಚಲೇ ಇಲ್ಲ. ಗುದ್ದಲಿ-ಪಿಕಾಸಿ ಹಿಡಿದು ಪೊಲೀಸರಿಂದ ಗುಂಡಿ ಮುಚ್ಚೋ ಕಾರ್ಯ ನಡೆದಿದೆ.

ದತ್ತಪೀಠದಿಂದ ಮಾಣಿಕ್ಯದಾರಕ್ಕೆ ತೆರಳುವ ರಸ್ತೆಯಲ್ಲಿ ರಸ್ತೆಗಿಂತ ಗುಂಡಿಗಳದ್ದೇ ದರ್ಬಾರ್ ಹೆಚ್ಚು. ಮಾಣಿಕ್ಯದಾರ ಮಾರ್ಗದ ಮಣ್ಣಿನ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲಾಗಿದೆ.

ಪೊಲೀಸರಿಗೆ ಸ್ಥಳಿಯ ಟ್ಯಾಕ್ಸಿ ಚಾಲಕರು ಕೈ ಜೋಡಿಸಿದ್ಧಾರೆ. ಪೊಲೀಸರ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ದತ್ತಪೀಠದಿಂದ ಮಾಣಿಕ್ಯದಾರಕ್ಕೆ ತೆರಳುವ ರಸ್ತೆಯ ಗುಂಡಿಗಳನ್ನು ಮುಚ್ಚಿದ್ಧಾರೆ.

Dattapeeth road repair by khaki-clad policemen