ರಾಯಚೂರು: ಮುಸ್ಲಿಂ ಬಾಂಧವರ ಪವಿತ್ರ ಉಮ್ರಾ ಪ್ರವಾಸಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದ ರಾಯಚೂರು ನಗರದ ಕುಟುಂಬವು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಸ್ಥಳೀಯ ದ್ವಾರಕ ನಗರ ನಿವಾಸಿ ಶಫೀದ ಹುಸೇನ್ ಸುಳ್ಳದ್ (56) ತಾಯಿ ಬೀಬಿ ಜಾನ್, ಪತ್ನಿ ಸಿರಾಜ ಬೇಗಂ, ಪುತ್ರಿ ಶಿಫಾ ಮೃತಪಟ್ಟವರಾಗಿದ್ದು, ಪುತ್ರ ಸಮೀರ್ ಸುಳ್ಳದ್ ಅವರಿಗೆ ತೀವ್ರ ಗಾಯಗಳಾಗಿವೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ಆಪ್ತಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶಫೀದ್ ಹುಸೇನ್ ಸುಳ್ಳದ್ ಕಳೆದ ಫೆ.14ರಂದು ಕುಟುಂಬ ಸಮೇತ ಉಮ್ರಾನ ಯಾತ್ರೆಗೆ ತೆರಳಿದ್ದರು.
ಬುಧವಾರ ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾದಲ್ಲಿ ನಾಲ್ಕು ಜನರು ಪ್ರಾಣ ಕಳೆದು ಕೊಂಡಿದ್ದು, ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಅಪಘಾತದ ಸುದ್ದಿ ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದು, ಘೋರ ದುರಂತದ ಮಾಹಿತಿ ಪಡೆದ ಕುಟುಂಬ ವರ್ಗವು ದುಃಖ ಸಾಗರದಲ್ಲಿ ಮುಳುಗಿದೆ.
Four died in Raichur