ರಾಯ​ಚೂ​ರು: ಮುಸ್ಲಿಂ ಬಾಂಧ​ವರ ಪವಿತ್ರ ಉಮ್ರಾ ಪ್ರವಾ​ಸಕ್ಕಾಗಿ ಸೌದಿ ಅರೇ​ಬಿ​ಯಾಗೆ ತೆರ​ಳಿದ್ದ ರಾಯ​ಚೂರು ನಗ​ರದ ಕುಟುಂಬವು ರಸ್ತೆ ಅಪ​ಘಾ​ತ​ದಲ್ಲಿ ಮೃತ​ಪ​ಟ್ಟಿ​ರುವ ಘಟನೆ ನಡೆ​ದಿದೆ.

ಸ್ಥಳೀಯ ದ್ವಾರಕ ನಗರ ನಿವಾಸಿ ಶಫೀದ ಹುಸೇನ್‌ ಸುಳ್ಳದ್‌ (56) ತಾಯಿ ಬೀಬಿ ಜಾನ್‌, ಪತ್ನಿ ಸಿರಾಜ ಬೇಗಂ, ಪುತ್ರಿ ಶಿಫಾ ಮೃತ​ಪ​ಟ್ಟ​ವ​ರಾ​ಗಿದ್ದು, ಪುತ್ರ ಸಮೀರ್‌ ಸುಳ್ಳದ್‌ ಅವ​ರಿಗೆ ತೀವ್ರ ​ಗಾ​ಯ​ಗ​ಳಾ​ಗಿವೆ. ರಾಯ​ಚೂರು ಕೃಷಿ ವಿಜ್ಞಾ​ನ​ಗಳ ವಿಶ್ವ​ವಿ​ದ್ಯಾ​ಲ​ಯದ ಕುಲ​ಪ​ತಿ​ಗಳ ಆಪ್ತಸಹಾ​ಯ​ಕ​ರಾಗಿ ಕೆಲಸ ಮಾಡು​ತ್ತಿದ್ದ ಶಫೀದ್‌ ಹುಸೇನ್‌ ಸುಳ್ಳದ್‌ ಕಳೆದ ಫೆ.14ರಂದು ಕುಟುಂಬ ಸಮೇತ ಉಮ್ರಾನ ಯಾತ್ರೆ​ಗೆ ತೆರ​ಳಿ​ದ್ದರು.

ಬುಧ​ವಾರ ಸೌದಿ ಅರೇ​ಬಿ​ಯಾ​ದಲ್ಲಿ ನಡೆದ ಭೀಕರ ರಸ್ತೆ ಅಪ​ಘಾ​ದಲ್ಲಿ ನಾಲ್ಕು ಜನರು ಪ್ರಾಣ ​ಕ​ಳೆ​ದು​ ಕೊಂಡಿದ್ದು, ಒಬ್ಬರು ಮಾತ್ರ ಬದು​ಕು​ಳಿ​ದಿ​ದ್ದಾರೆ. ಅಪ​ಘಾ​ತದ ಸುದ್ದಿ​ ಪೊಲೀ​ಸರು ಕುಟುಂಬ​ಸ್ಥ​ರಿಗೆ ತಿಳಿ​ಸಿದ್ದು, ಘೋರ ದುರಂತದ ಮಾಹಿತಿ ಪಡೆದ ಕುಟುಂಬ ವರ್ಗವು ದುಃಖ ಸಾಗ​ರ​ದಲ್ಲಿ ಮುಳು​ಗಿದೆ.

Four died in Raichur