ನವದೆಹಲಿ: ಮಾ.13ರಂದು ಸಂಸತ್ತಿನ ಬಜೆಟ್‌ ಅಧಿವೇಶನದ 2ನೇ ಭಾಗ ಆರಂಭವಾದ ದಿನದಿಂದಲೂ ಅದಾನಿ ವಿಷಯ ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ ಸದಸ್ಯರು, ಸೋಮವಾರ ರಾಹುಲ್‌ ಗಾಂಧಿ ಅವರ ಸದಸ್ಯತ್ವ ಅನರ್ಹಗೊಳಿಸಿದ ವಿಷಯ ಮುಂದಿಟ್ಟು ಭಾರಿ ಪ್ರತಿಭಟನೆ ನಡೆಸಿದರು.

ಸಂಸತ್ತಿನ ಉಭಯ ಸದನಗಳಿಗೂ ಕಪ್ಪುವಸ್ತ್ರ ವಸ್ತ್ರ ಧರಿಸಿ ಆಗಮಿಸಿದ್ದ ಕಾಂಗ್ರೆಸ್‌(Congress) ಸದಸ್ಯರು ಅದಾನಿ, ರಾಹುಲ್‌ ಅನರ್ಹತೆ ವಿಷಯ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಟಿ.ಎನ್‌.ಪ್ರತಾಪನ್‌ (TN Pratapan)ಮತ್ತು ಹೈಬಿ ಈಡೆನ್‌(Highby eden) ರಾಹುಲ್‌ರನ್ನು ಅನರ್ಹಗೊಳಿಸಿದ ಪತ್ರಗಳನ್ನು ಸ್ಪೀಕರ್‌ ಆಸನದತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಸದನದ ಬಾವಿಗೆ ನುಗ್ಗಿ ಜೋರಾಗಿ ಗದ್ದಲ ಎಬ್ಬಿಸಿದರು. ಹೀಗಾಗಿ ಉಭಯ ಸದನಗಳ ಕಲಾಪವನ್ನೂ ತಲಾ ಎರಡು ಬಾರಿ ಮುಂದೂಡಿ ಕೊನೆಗೆ ಮಂಗಳವಾರಕ್ಕೆ ಮುಂದೂಡಲಾಯಿತು.

ಈ ನಡುವೆ ರಾಜ್ಯಸಭೆಯಲ್ಲಿ ಹಣಕಾಸು ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಬಜೆಟ್‌ನ ಅನ್ನು ಧ್ವನಿ ಮತದಿಂದ ಅಂಗೀಕರಿಸಿ ಲೋಕಸಭೆಗೆ ಮರಳಿಸಲಾಯಿತು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಅದಾನಿ ವಾಗ್ಬಾಣ ಬಿಟ್ಟಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಅದಾನಿ ವಿಷಯದ ಬಗ್ಗೆ ಯಾಕೆ ಯಾವುದೇ ತನಿಖೆ ನಡೆಸುತ್ತಿಲ್ಲ? ಅಷ್ಟೊಂದು ಹೆದರಿಕೆ ಏಕೆ?’ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ(Rahul gandhi), ‘ಎಲ್‌ಐಸಿ ಬಂಡವಾಳ ಅದಾನಿಗೆ! ಎಸ್‌ಬಿಐ(SBI invest) ಬಂಡವಾಳವೂ ಅದಾನಿಗೆ! ಮತ್ತು ಇದೀಗ ಕಾರ್ಮಿಕರ ಭವಿಷ್ಯ ನಿಧಿ ಮಂಡಳಿಯ ಹಣವೂ ಅದಾನಿ()ಗೆ. ‘ಮೊದಾನಿ’ (ಮೋದಿ+ಅದಾನಿ) ಪ್ರಕರಣ ಬೆಳಕಿಗೆ ಬಂದ ನಂತರವೂ ಸಾರ್ವಜನಿಕರ ಭವಿಷ್ಯ ನಿಧಿ ಮಂಡಳಿಯ ಹಣವನ್ನು ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿರುವುದೇಕೆ? ಮಿ.ಪ್ರೈಮ್‌ಮಿನಿಸ್ಟರ್‌, ನೋ ಇನ್ವೆಸ್ಟಿಗೇಷನ್‌, ನೋ ಆನ್ಸರ್‌ (ಮಿ.ಪ್ರಧಾನಿಗಳೇ, ತನಿಖೆಯೂ ಇಲ್ಲ, ಯಾವುದೇ ಉತ್ತರವೂ ಇಲ್ಲ)’ ಎಂದು ಮೋದಿ(Narendra Modi) ಅವರನ್ನು ಪ್ರಶ್ನಿಸಿದ್ದಾರೆ.

Congress members disrupting the budget session of Parliament