ದೆಹಲಿ (ಕನ್ನಡನಾಡಿ ಸುದ್ದಿಜಾಲ): ಹಿಂದಿನ ವರ್ಷದಲ್ಲಿ ಕೊರೋನಾ ಸೋಂಕಿನಿಂದಾಗಿ ಮಾಜಿಕೇಂದ್ರ ಸಚಿವ ಸುರೇಶ್ ಅಂಗಡಿಯವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಸ್ಪಂಧಿಸದೆ ಮರಣ ಹೊಂದಿದ್ದರು.  ಅವರ ಮೃತ ದೇಹವನ್ನು ದೆಹಲಿಯ ಲಿಂಗಾಯತ ಸ್ಮಶಾನದಲ್ಲಿರಿಸಿ ಅಂತ್ಯಕ್ರಿಯೆ ನಡೆಸಲಾಗಿತ್ತು.  ಇದೇ ಸ್ಥಳದಲ್ಲೇ ಮಂಗಳವಾರ ಸುರೇಶ್ ಅಂಗಡಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಇದೇ ವೇಳೆ ಕೇಂದ್ರ ಸಚಿವ ನಾರಾಯಣ ಸ್ವಾಮಿ, ಕೇಂದ್ರ ಸಚಿವ ಡಿ.ವ್ಹಿ. ಸದಾನಂದಗೌಡ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದ  ಪ್ರತಾಪ್ ಸಿಂಹ, ಡಾ.ಉಮೇಶ್ ಜಾದವ್, ಮಾಜಿ ಸಚಿವ ಜಾರಕಿಹೊಳಿ, ಸುರೇಶ್ ಜಾರಕಿಹೊಳಿಯವರ ಧರ್ಮಪತ್ನಿ ಮಂಗಳ ಅಂಗಡಿ, ಸೇರಿದಂತೆ ಕುಟುಂಬದವರು, ಬಿಜೆಪಿ ನಾಯಕರು ಉಪಸ್ಥಿತರಿದ್ದರು.